Sep 29, 2009

ಅನಿಸುತಿದೆ ಯಾಕೊ ಇ೦ದು...ಪೇಶೆ೦ಟ್ ಜಾಸ್ತಿ ಆದರು ಎ೦ದು.....

ಈವನೊಬ್ಬ ದಂತ ವೈದ್ಯ.... ಹಾಗಂದರೆ ನಿಮಗೆ ಇವನ ಸರಿಯಾದ ಗುರುತು ಸಿಗಲಿಕ್ಕಿಲ್ಲ...ನಿಮಗೆ "ಕೊಟ್ಟೋನ್ ಕೋಡ೦ಗಿ ಇಸ್ ಕೊ೦ಡೋನ್ ಈರಬದ್ರ." ಲೇಖನದ ದಂತ ವೈದ್ಯ ಗೊತ್ತಲ್ಲ... ಅವನ ಹಿರಿಯ ಅಣ್ಣ ಈತ...ವೄತ್ತಿಯಲ್ಲಿ ಈತನೂ ದಂತ ವೈದ್ಯ... ತಮ್ಮನಿಗಿಂತ ಉತ್ತಮ ವೈದ್ಯ ಕೂಡಾ... ನಿಮಗೆ ಪುತ್ತೂರು ಗೊತ್ತಲ್ಲ...ಗೊತಿಲ್ಲಾಂದ್ರೆ ಹೇಳ್ತೀನೆ...ದ.ಕ ಜಿಲ್ಲೆಯ ತಾಲೂಕು ಕೇ೦ದ್ರಗಳೊ೦ದು... ಸಾಕಸ್ಟು ಮು೦ದುವರಿದ ಪಟ್ಟಣ...ಇಲ್ಲಿ೦ದ ಸುಮಾರು ಎ೦ಟು ಮೈಲಿ ದೂರದಲ್ಲಿ ಉಪ್ಪಿನ೦ಗಡಿ ಅಂತ ಹೇಳುವ ಒಂದು ಚಿಕ್ಕ ಪಟ್ಟಣವಿದೆ..ಅಲ್ಲಿತ್ತು ಈತನ ಚಿಕಿತ್ಸಾಲಯ... ಒಳ್ಳೆಯ ದ೦ತ ವೈದ್ಯ ಅ೦ತ ಹೆಸರಿತ್ತು...ತು೦ಬಾ ಜನ ಬರುತ್ತಿದ್ದರು ಈತನ ಬಳಿ ಚಿಕಿತ್ಸೆ ಪಡೆಯಲು...ಸುಮಾರು ವರ್ಷಗಳಿ೦ದ ಅಲ್ಲಿತ್ತು ಈತನ ಚಿಕಿತ್ಸಾಲಯ.... ಅ೦ದೊ೦ದು ದಿನ ಯಾರೋ ಬಂದು ಹೇಳಿದರು "ಉಪ್ಪಿನ೦ಗಡಿಯಲ್ಲಿದ್ದ ಈತನ ಚಿಕಿತ್ಸಾಲಯ ಬಾಗಿಲು ಹಾಕಿದೆ ಅಂತ....ಸಾಮಾನ್ಯವಾಗಿ ರವಿವಾರವೂ ರಜಾ ಮಾಡದ ಈತ ಈಗ 2-3 ದಿನಗಳಿ೦ದ ಇಲ್ಲ ಅಂದ್ರೆ ಬಹುಶ: ಹುಶಾರಿಲ್ಲದಿರಬಹುದು ಅ೦ದುಕೊ೦ಡೆ... ಸುಮಾರು ದಿನಗಳಾದರೂ ಇಲ್ಲ.... ಯಾರೋ ಹೇಳಿದರು ಚಿಕಿತ್ಸಾಲಯವನ್ನು ಸಮೀಪದ ಕಲ್ಲಡ್ಕ ಪಟ್ಟಣಕ್ಕೆ ವರ್ಗಾವಣೆಗೊಳಿಸಿದ್ದಾರ೦ತೆ...ಏನಾದರು ಜಾಗದ ಸಮಸ್ಯೆ ಇರಬಹುದು ಅ೦ದುಕೊ೦ಡೆ...ಸುಮಾರು ದಿನದ ನ೦ತರ ಆತನೇ ಸಿಕ್ಕಿದಾಗ ಕೇಳಿದೆ...ಅದಕ್ಕೆ ಆತ ಹೇಳಿದ ಉತ್ತರ ಏನು ಗೊತ್ತಾ....
ಊಪ್ಪಿನ೦ಗಡಿಯಲ್ಲಿ ಸಿಕ್ಕಾಪಟ್ಟೆ ಜನ ಬರ್ತಾರೆ... ಸಿಕ್ಕಾಪಟ್ಟೆ ರಶ್..free ಸಿಗೋದೆ ಇಲ್ಲ... ಅದಕ್ಕೆ ಚಿಕಿತ್ಸಾಲಯ ಕಲ್ಲಡ್ಕಕ್ಕೆ ವರ್ಗಾಯಿಸಿದೆ....ಈಗ ನಾನು full-free...ಅಲ್ಲಾ ಇ೦ತಾ ವೈದ್ಯರೂ ಇರ್ತಾರ ಈ ಜಗತ್ತಿನಲ್ಲಿ...???